Friday 11 August 2017

ಸ್ವಾತಂತ್ರ್ಯ ದಿನ (ಕನ್ನಡ ಭಾಷಣ )

ವೇದಿಕೆಯಲ್ಲಿರುವ ಎಲ್ಲ ಗಣ್ಯ ವ್ಯಕ್ತಿಗಳೇ ,
ಪ್ರೀತಿಯ ಅಧ್ಯಾಪಕ ವೃಂದದವರೇ , ರಕ್ಷಕರೇ
 ಹಾಗೂ ಸಹಪಾಠಿಗಳೇ ,ಸ್ವಾತಂತ್ರ್ಯ ದಿನಾಚರಣೆಯ 
ಈ ಸಂದರ್ಭದಲ್ಲಿ ಒಂದೆರಡು ಮಾತುಗಳನ್ನಾಡಲು 
ಬಯಸುತ್ತೇನೆ . 
       1947ರಲ್ಲಿ ನಮ್ಮ ಭಾರತ ಸ್ವತಂತ್ರವಾದದ್ದು 
ಎಲ್ಲರಿಗೂ ಗೊತ್ತಿರುವ ವಿಚಾರ . ನಮ್ಮ ರಾಷ್ಟ್ರ ಧ್ವಜ
 ಮೂರು ಬಣ್ಣಗಳಿಂದ ಕಂಗೊಳಿಸಿ ಹಾರಾಡುತ್ತಿರುವ 
ಈ ದಿವಸ ಎಲ್ಲರಿಗೂ ಹೆಮ್ಮೆ ಎನಿಸುತ್ತದೆ.
 ಈ ಧ್ವಜದ ಹಿಂದೆ ನೂರಾರು ವರ್ಷಗಳ ತ್ಯಾಗದ 
ಕತೆಯಿದೆ.  ಬಲಿದಾನದ ಇತಿಹಾಸವಿದೆ . ಹೋರಾಟದ
 ನೆನಪುಗಳು ಇವೆ . ನಮ್ಮ ಹಿರಿಯರ ಒಗ್ಗಟ್ಟು
 ಆ ಕಾಲಕ್ಕೆ ಗೆದ್ದಿತ್ತು . ಹಾಗಾಗಿ ಎಲ್ಲ ನೋವನ್ನು
 ಮರೆತು ಸಂತೋಷವನ್ನು ಪಡೆದ ದಿನವನ್ನು
 ಪ್ರತಿ ವರ್ಷ ಎಲ್ಲರೂ ಸೇರಿ ಆಚರಿಸುತ್ತೇವೆ . 
          ನಮಗೆ ಸ್ವಾತಂತ್ರ್ಯ ಸಿಕ್ಕಿ 70 ವರ್ಷಗಳು ಕಳೆದಿವೆ.
 ಆದರೆ ದೇಶ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಆಗಲಿಲ್ಲ . 
ಮನಸ್ಸು ಮಾಡಿದ್ದರೆ ಮೊದಲ ಸ್ಥಾನದಲ್ಲಿ ಇರಬಹುದಿತ್ತು . 
ನಮ್ಮಲ್ಲಿ ಸಾಕಷ್ಟು ಸಂಪತ್ತು ಇದೆ. ಆದರೆ ಅದನ್ನು ಸರಿಯಾಗಿ 
ಬಳಸಿಕೊಳ್ಳಲಿಲ್ಲ . ಇನ್ನಾದರೂ "ನಮ್ಮ ದೇಶ "ಎನ್ನುವ 
ಅಭಿಮಾನದಿಂದ ದುಡಿಯಬೇಕು. 
               ಒಂದು ಕಾಲಕ್ಕೆ ನಮ್ಮ ದೇಶ ಜಗತ್ತಿಗೇ 
ಮಾರ್ಗದರ್ಶನ ಮಾಡುತಿತ್ತು. ನಮ್ಮಲ್ಲಿ ಅನೇಕ 
ಪುಣ್ಯ ಪುರುಷರು , ವೀರ ಮಹಿಳೆಯರು ಆಗಿಹೋಗಿದ್ದಾರೆ.
 ಅವರ ಆದರ್ಶಗಳನ್ನು ನಾವು ಪಾಲಿಸಬೇಕು .
ಈ ಸಂದರ್ಭದಲ್ಲಿ ಕಳೆದ ಕಷ್ಟಗಳನ್ನು ಮತ್ತೊಮ್ಮೆ ನೆನಪಿಸಬೇಕು. 
ಆಗ ಸ್ವಾತಂತ್ರ್ಯದ  ಬೆಲೆ ಗೊತ್ತಾಗುತ್ತದೆ . ಮುಂದೆ ದೇಶಕ್ಕಾಗಿ 
ನಮ್ಮ ಕೈಲಾಗುವ ಸೇವೆ ಮಾಡುತ್ತಾ ಭಾರತ ಮಾತೆಯ
 ಋಣವನ್ನು ತೀರಿಸೋಣ ಎಂದು ಹೇಳುತ್ತ ನನ್ನ
 ಮಾತುಗಳನ್ನು ನಿಲ್ಲಿಸುತ್ತೇನೆ 
                        
                                 ಜೈ ಹಿಂದ್ 

Thursday 10 August 2017

ಯುದ್ಧ ವಿರೋಧಿ ದಿನಾಚರಣೆ






ಯುದ್ಧ ದಿನಾಚರಣೆಯ ಅಂಗವಾಗಿ ಶಿಕ್ಷಕರಾದ ಶ್ರೀನಿವಾಸ ಮಾಸ್ಟರ್ ದಿನಾಚರಣೆಯ ಮಹತ್ವವನ್ನು ತಿಳಿಸಿದರು.